ಆರೋಗ್ಯ ಸಮಗ್ರ ಸುದ್ದಿ

ಹೃದಯಾಘಾತಕ್ಕೆ ರೈತ ಬಲಿ!

Share It


ಇತ್ತೀಚೆಗೆ ರಾಜ್ಯದಲ್ಲಿ ಹೃದಾಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಕ್ರಮೇಣ ಏರಿಕೆಯಾಗುತ್ತಿದ್ದು, ಇಂದು ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಹೃದಯ ಸ್ತಂಭನದಿಂದ ಅನ್ನಧಾತ ಬಲಿಯಾಗಿದ್ದಾರೆ.


ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಗುಂಡ್ಲುಪೇಟೆಯಿಂದ ರೈತ ಈಶ್ವರ್ (50) ಆಗಮಿಸಿದ್ದು, ರೈಲು ಇಳಿದು ಹೊರಗೆ ಬರುವಾಗ ಅಸ್ವಸ್ಥರಾಗಿದ್ದಾರೆ. ಕೂಡಲೇ ಪೊಲೀಸರು ಸಿಆರ್ಪಿ ನೀಡಿ ಅಪೋಲೋ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ರೈತ ಕೊನೆಯುಸಿರೆಳೆದಿದ್ದಾರೆ.

You cannot copy content of this page