ಅಪರಾಧ ಸಮಗ್ರ ಸುದ್ದಿ

ನಾನು ಹೆಲ್ಮೇಟ್ ಹಾಕೊಲ್ಲ ಎಂದ ಜೆಡಿಎಸ್ ಘಟಕದ ಅಧ್ಯಕ್ಷ! ಮುಂದೇನಾಯ್ತು ನೋಡಿ!

Share It


ನಾನು ಜೆಡಿಎಸ್ ಘಟಕದ ಅಧ್ಯಕ್ಷ ನಾನು ಹೆಲ್ಮೆಟ್ ಹಾಕೊಲ್ಲ. ನೀವು ಇಲ್ಲಿದ್ದೀರ ಎಂದು ನಾನು ಬೇಕಂತಲೇ ಇಲ್ಲಿಗೆ ಬಂದೆ ಎಂದು ಟ್ರಾಫಿಕ್ ಪೊಲೀಸರೊಂದಿಗೆ ಉದ್ದಟತನ ಮೆರೆದಿದ್ದ ಅಸಾಮಿಗೆ ಪೊಲೀಸರು ಇದೀಗ ಸರಿಯಾದ ಶಾಸ್ತಿ ಮಾಡಿದ್ದಾರೆ.


ಹೌದು ಬೆಂಗಳೂರು ನಗರದ ಜ್ಞಾನ ಭಾರತಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಚಾರಿ ಪೊಲೀಸರು ತಪಾಸಣೆ ನಡೆಸುವ ವೇಲೆ ವ್ಯಕ್ತಿಯೋರ್ವ ಹೆಲ್ಮೇಟ್ ಧರಿಸದ ದ್ವಿಚಕ್ರ ವಾಹನ ಚಲಿಸುತ್ತಿರುವುದು ಕಂಡು ಬಂದು ವಾಹನವನ್ನು ನಿಲ್ಲಿಸುತ್ತಾರೆ. ಈ ವೇಳೆ ಆ ವ್ಯಕ್ತಿ ಪೊಲೀಸರೊಂದಿಗೆ ಉದ್ದಟತನ ಮೆರೆದಿದ್ದಾನೆ. ಮನಬಂದಂತೆ ಪೊಲೀಸರಿಗೆ ಅವಾಜ್ ಹಾಕಿದ್ದಾನೆ.

ನಾನು ಯಶವಂತಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಘಟಕದ ಅಧ್ಯಕ್ಷ, ನಾನು ಹೆಲ್ಮೆಟ್ ಹಾಕೊಲ್ಲ. ನೀವೇ ಲಂಚ ಪಡೆಯುತ್ತಿರುತ್ತೀರಿ, ನಾನು ಬೇಕಾದ್ರೆ ಕೋರ್ಟ್ನಲ್ಲಿ ಫೈನ್ ಕಟ್ತಿನಿ ಎಂದು ಅವಾಜ್ ಹಾಕಿದ್ದಾನೆ. ಕಾರಣ ನವೀನ್ ಗೌಡನ ವಿರುದ್ಧ ಜ್ಞಾನ ಭಾರತಿ ಪೊಲೀಸ್ ಠಾಣೆಗೆ ಎಸ್ಐ ಕುಮಾರ್ ದೂರು ನೀಡಿದ್ದು, ಪೊಲೀಸರು ನವೀನ್ ಗೌಡನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

You cannot copy content of this page