
ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿಗೆ ನೂತನ ಎಡಿಎಲ್ಆರ್ ನಿಯೋಜನೆಗೊಳಿಸಿ ಸರಕಾರ ಆದೇಶ ಹೊರಡಿಸಿದ್ದು, ಇದಾಗಲೇ ನೂತನ ಎಡಿಎಲ್ಆರ್ ದೇವನಹಳ್ಳಿ ಎಡಿಎಲ್ಆರ್ ಆಗಿ ಅಧಿಕಾರ ಸ್ವೀಕರಿಸಿ ಕಾರ್ಯೋನ್ಮುಕರಾಗಿದ್ದಾರೆ.

ಈ ಹಿಂದೆ ದೇವನಹಳ್ಳಿ ತಾಲ್ಲೂಕಿಗೆ ಸಿದ್ದರಾಮಯ್ಯನವರು ಭೂ ದಾಖಲೆಗಳ ಸಹಾಯಕ ನಿರ್ದೇಶಕರಾಗಿದ್ದು, ಇದೀಗ ಚಂದ್ರು ರವರನ್ನು ಆ ಸ್ಥಾನಕ್ಕೆ ವರ್ಗಾವಣೆ ಮಾಡಿದ್ದಾರೆ. ಈ ಹಿಂದೆ ದೇವನಹಳ್ಳಿ ತಾಲ್ಲೂಕು ಸರ್ವೇ ಇಲಾಖೆಯಲ್ಲಿ ಸೂಪರವೈಸರ್ ಆಗಿ ಕರ್ತವ್ಯ ನಿರ್ವಹಿಸಿದ ಅನುಭವ ಇವರಿಗಿದ್ದು ತಾಲ್ಲೂಕಿನ ಜನತೆ ಮೆಚ್ಚುಗೆಗೆ ಪಾತ್ರರರಾಗಿದ್ದರು. ಕಾರಣ ತಾಲ್ಲೂಕಿನ ಜನತೆ ಇವರ ಸಾಕಷ್ಟು ಉತ್ತಮ ಮತ್ತು ತ್ವರಿತ ಕಾರ್ಯಗಳ ನಿರೀಕ್ಷೆಯಲ್ಲಿದ್ದಾರೆ.