ಅಪಘಾತ

ದೇವನಹಳ್ಳಿ ಬಳಿಯ ಭೀಕರ ಅಪಘಾತದಲ್ಲಿ ಮೃತಪಟ್ಟ ಮೂವರು ಸ್ನೇಹಿತರು ಇವರೇ ನೋಡಿ!

Share It

ಜವರಾಯನ ಅಟ್ಟಹಾಸ.. ಮೂವರು ಸ್ನೇಹತರು ಅಪಘಾತದಲ್ಲಿ ದುರ್ಮರಣ..!.

ಡಿಕ್ಕಿ ರಭಸಕ್ಕೆ ಕಾರನಲ್ಲಿದ್ದ ಮೂವರು ಸ್ನೇಹಿತರ ದೇಹ ಛಿದ್ರ ಛಿದ್ರ..!.

ದೇವನಹಳ್ಳಿ ಬಳಿಯ ಲಾಲಗೊಂಡನಹಳ್ಳಿ ಬಳಿ ಭೀಕರ ಅಪಘಾತ.

KSRTC ಬಸ್ ಮತ್ತು ಕಿಯಾ ಕಾರು ನಡುವೆ ಭೀಕರ ಡಿಕ್ಕಿ.

ಬೆಂಗಳೂರಿನಿಂದ ಬರ್ತಿದ್ದ ಬಸ್ಸಿಗೆ ಚಿಕ್ಕಬಳ್ಳಾಪುರದಿಂದ ಬರ್ತಿದ್ದ ಕಾರು ಡಿಕ್ಕಿ.

ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಎದುರು ಬರ್ತಿದ್ದ KSRTC ಬಸ್ಸಿಗೆ ಡಿಕ್ಕಿ.

ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂರು ಮಂದಿ ಸ್ಥಳದಲ್ಲೇ ಸಾವು.

ಕಾರು ಮತ್ತು ಬಸ್ಸಿನ ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ಜಖಂ.

ಬೆಂಗಳೂರು‌ ಟು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಘಟನೆ.

ಸಾದಹಳ್ಳಿ ಗ್ರಾಮದ ಮನೋಜ್ ಸೇರಿ ಮತ್ತಿಬ್ಬರು ಸ್ನೇಹಿತರು ದುರ್ಮರಣ.

ಮೃತ ದೇಹಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ.

ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ‌.

ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ಲಾಲಗೊಂಡನಹಳ್ಳಿ ಬಳಿ ಘಟನೆ.

You cannot copy content of this page