ಸಮಗ್ರ ಸುದ್ದಿ

ಆಹಾರ ಸಚಿವರ ಕ್ಷೇತ್ರದಲ್ಲಿ ಅನಾವರಣಗೊಳ್ಳದ ಅಂಬೇಡ್ಕರ್ ಪ್ರತಿಮೆ!

Share It


ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ಚಪ್ಪರದಕಲ್ಲು ಬಳಿಯ ಜಿಲ್ಲಾಡಳಿತ ಭವನದ ಎದುರು ಡಾ.ಬಿ.ಆರ್. ಅಂಬೇಡ್ಕರ್ ರವರ ಪುತ್ಹಳಿ ನಿರ್ಮಾಣ ಮಾಡಲಾಗಿದ್ದು, ಪುತ್ಹಳಿಗೆ ಇನ್ನು ಅನಾವರಣ ಭಾಗ್ಯ ಲಭಿಸಿಲ್ಲ.


14 ಅಡಿ ಎತ್ತರದ ಕಂಚಿನ ಲೋಹದ ಪ್ರತಿಮೆ ಇದಾಗಿದ್ದು, ಕರ್ನಾಟಕ ಚಿತ್ರಕಲಾ ಪರಿಷತ್ ಈ ಪುತ್ಹಳಿಯನ್ನು ಸಿದ್ಧಪಡಿಸಿದೆ. ಪ್ರತಿಮೆ ಅನಾವರಣಕ್ಕೆ ಸಿದ್ಧವಾಗಿ 3 ರಿಂದ 4 ತಿಂಗಳುಗಳಾದರೂ ಅನಾವರಣ ಮಾತ್ರ ಮಾಡುತ್ತಿಲ್ಲ. ಕಾರಣ ಕೇಳಿದರೆ ಅಧಿಕಾರಿಗಳು ತಮ್ಮದೆ ಆದ ಸಬೂಬುಗಳನ್ನು ನೀಡುತ್ತಿದ್ದಾರೆ.


ಜೊತೆಗೆ ಕರ್ನಾಟಕ ಚಿತ್ರಕಲಾ ಪರಿಷತ್ ಕಳೆದ ಮಾರ್ಚ್ನಲ್ಲಿಯೇ ಪುತ್ಹಳಿಯನ್ನು ಜಿಲ್ಲಾಡಳಿತ ಭವನ ಮುಂಭಾಗಕ್ಕೆ ಸಾಗಿಸಿದ್ದು, ಪುತ್ಹಳಿಯನ್ನು ನಿರ್ಮಿತಿ ಕೇಂದ್ರಕ್ಕೆ ಮತ್ತು ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರ ಮಾಡಿರುವುದಾಗಿ ಹಸ್ತಾಂತರ ಪ್ರತಿಯೊಂದು ವೈರಲ್ ಆಗುತ್ತಿದೆ. ಆದರೆ ಈ ಹಸ್ತಾಂತರ ಪ್ರತಿಯಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ನ ಮೊಹರು ಮತ್ತು ಸಹಿ ಮಾತ್ರವಿದ್ದು, ನಿರ್ಮಿತಿ ಕೇಂದ್ರ ಮತ್ತು ಸಮಾಜ ಕಲ್ಯಾಣ ಇಲಾಖೆಯವರ ಸಹಿ ಮತ್ತು ಮೊಹರು ಇಲ್ಲದಂತಾಗಿದೆ.


ಏನೇ ಇರಲಿ, ಅನಾವರಣಕ್ಕೆ ಸಿದ್ಧವಾಗಿರುವ ಪ್ರತಿಮೆಯನ್ನು ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಅನಾವರಣ ಗೊಳಿಸದಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಸೂಕ್ತ ದಿನಾಂಕ ಗುರುತಿಸಿ ಪ್ರತಿಮೆ ಅನಾವರಣ ಮಾಡಬೇಕು ಎಂಬುದು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿರುವ ಕೂಗಾಗಿದೆ.

You cannot copy content of this page