
ಪ್ರಿಯಕರನೇ ಪ್ರಿಯತಮೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಪೂರ್ಣ ಪ್ರಜ್ಞಾ ಲೇಔಟ್ ನಲ್ಲಿರುವ ಓಯೋ ರೂಂ ನಲ್ಲಿ ಕೊಲೆ ನಡೆದಿದೆ. ಕಳೆದ ಎರಡು ವಾರಗಳ ಹಿಂದೆ ಘಟನೆ ನಡೆದಿದ್ದು, ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂದಹಾಗೆ ಕೊಲೆಯಾಗಿರುವ ಹರಿಣಿ ವಿವಾಹಿತೆಯಾಗಿದ್ದು, ಪತಿ ಜೊತೆ ವಾಸವಾಗಿದ್ದಳು. ಈ ನಡುವೆ ಜಾತ್ರೆಯೊಂದರಲ್ಲಿ ಟೆಕ್ಕಿ ಯಶಸ್ ನ ಪರಿಚಯವಾಗಿದ್ದು, ಇಬ್ಬರು ಪರಸ್ಪರ ಮೊಬೈಲ್ ನಂಬರ್ ತೆಗೆದುಕೊಂಡಿದ್ದಾರೆ. ಈ ಪರಿಚಯ ಇಬ್ಬರ ನಡುವೆ ಅನೈತಿಕ ಸಂಬಂಧ ಬೆಳೆಯುವಷ್ಟಾಗಿದೆ.

ಈ ವಿಚಾರ ಹರಿಣಿ ಪತಿಗೆ ತಿಳಿದು ಯಶಸ್ ಸಹವಾಸ ಬಿಡುವಂತೆ ಎಚ್ಚರಿಕೆ ಸಹ ನೀಡಿದ್ದಾನೆ. ಆದರೂ ಹರಿಣಿ ಯಶಸ್ ನೊಂದಿಗಿನ ಸಂಬಂಧ ಮುಂದುವರೆಸಿದ್ದಾಳೆ. ಕಳೆದ ಶುಕ್ರವಾರ ಹರಿಣಿಯನ್ನು ಯಶಸ್ ಓಯೋ ರೂಂಗೆ ಕರೆಸಿಕೊಂಡಿದ್ದಾನೆ.
ಈ ವೇಳೆ ಹರಿಣಿ ಮತ್ತು ಯಶಸ್ ನಡುವೆ ಮಾತಿನ ಚಕಮಕಿ ನಡೆದಿದ್ದು, ಯಶಸ್ ಚಾಕುವಿನಿಂದ ಇರಿದು ಹರಿಣಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಒಟ್ಟಾರೆ ಗಂಡನ ಬಿಟ್ಟು ಮಿಂಡನ ಜೊತೆ ಸಹವಾಸ ಬೆಳೆಸಿದ್ದ ಹರಿಣ ಬರ್ಬರವಾಗಿ ಹತ್ಯೆಯಾಗಿ ದುರಂತ ಅಂತ್ಯ ಕಂಡಿದ್ದಾಳೆ.