
ಏರ್ಪೋರ್ಟ್ ನಲ್ಲಿ ಉಬರ್ ಸಂಸ್ಥೆ ವಿರುದ್ದ ದಿಢೀರ್ ಪ್ರತಿಭಟನೆಗಿಳಿದ ಟ್ಯಾಕ್ಸಿ ಚಾಲಕರು!
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟ್ಯಾಕ್ಸಿ ಪಾರ್ಕಿಂಗ್ ಸ್ಥಳದಲ್ಲಿ ಟ್ಯಾಕ್ಸಿ ಚಾಲಕರು ಪ್ರತಿಭಟನೆ ನಡೆಸಿದರು.
ಉಬರ್ ಸಂಸ್ಥೆಯವರಜ ಉಬರ್ ಎಕ್ಸ್ ಎಲ್ ವಾಹನಗಳಿಗೆ ಸಂಬಂಧಿಸಿದಂತೆ ಮಾಡಿರುವ ಟೋಕನ್ ವ್ಯವಸ್ಥೆ ಅವ್ಯವಸ್ಥೆಯಿಂದ ಕೂಡಿದ್ದು, ಇದರಿಂದ ಸಮರ್ಪಕವಾಗಿ ಬುಕಿಂಗ್ ದೊರೆಯುತ್ತಿಲ್ಲ. ಎರಡು ಮೂರು ದಿನಗಳಾದರೂ ಬುಕಿಂಗ್ ಸಿಗದೆ ಚಾಲಕರು ಸಂಕಷ್ಟಕ್ಕೀಡಾಗಿದ್ದು, ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸುವತ್ತ ಉಬರ್ ಕಂಪನಿ ಮುಂದಾಗಬೇಕಿದೆ ಎಂದು ಆಗ್ರಹಿಸಿದರು.
ಈ ಅವ್ಯವಸ್ಥೆಯಿಂದ ನಕಲಿ ಬುಕಿಂಗ್ ಮಾಡಿಕೊಂಡು ಪ್ಯಾಸೆಂಜರ್ ಬುಕ್ಕಿಂಗ್ ಮಾಡುವವರ ಹಾವಳಿ ಹೆಚ್ಚಾಗಿದೆ. ಈ ಸಂಬಂಧ ಉಬರ್ ಸಂಸ್ಥೆಯವರಿಗೆ ತಿಳಿಸಿದರು ಕ್ಯಾರೆ ಎನ್ನುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ಸಿಗಲಿಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.