ಅಪರಾಧ ಸಮಗ್ರ ಸುದ್ದಿ

ಈ ಕಳ್ಳರಿಗೆ ಓಮ್ನಿ ಕಾರುಗಳೇ ಟಾರ್ಗೆಟ್ ಯಾಕೆ ಗೊತ್ತಾ?

Share It

ಹೌದು ಕೇವಲ ಓಮ್ನಿ ಕಾರುಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಖದೀಮರನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ. ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಮೇಶ್, ತಬ್ರೇರ್ ಹಾಗೂ ಜಬೀರ್ ಖಾನ್ ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ 12 ಲಕ್ಷ ಮೌಲ್ಯದ 6 ಓಮ್ನಿ ಕಾರುಗಳನ್ನು ವಶಪಡಿಸಿಕೊಂಡಿದ್ದು, ಖತರ್ನಾಕ್ ಗಳು ಈ ಹಿಂದೆ ಟ್ರ್ಯಾಕ್ಟರ್ ಗಳನ್ನು ಕಳ್ಳತನ ಮಾಡ್ತಿದ್ದ ಗ್ಯಾಂಗ್ ಎನ್ನಲಾಗಿದೆ. ಜೊತೆಗೆ ಟ್ರ್ಯಾಕ್ಟರ್ ಕಳ್ಳತನ ಕೇಸ್ ನಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ಈ ಕಳ್ಳರನ್ನು ಜೈಲಿಗಟ್ಟಿದ್ದರು.

ಜೈಲು ಸೇರಿ ಹೊರಗಡೆ ಬಂದ ನಂತರ ಟ್ರ್ಯಾಕ್ಟರ್ ಕದಿಯುದನ್ನು ಬಿಟ್ಟು ಓಮ್ನಿ ಕಾರುಗಳಿಗೆ ಟಾರ್ಗೆಟ್ ಮಾಡಿದ್ದಾರೆ. ಇನ್ನು ಕದ್ದ ಓಮ್ನಿ ಕಾರುಗಳನ್ನು ಮಾರಾಟ ಮಾಡುತ್ತಿದ್ದದ್ದು ಹಳ್ಳಿಗಾಡು ಪ್ರದೇಶದ ಜನರಿಗೆ. ಕಡಿಮೆ ಬೆಲೆಗೆ ರೈತರಿಗೆ ಮತ್ತು ರೋಡ್ ಪಕ್ಕದಲ್ಲಿ ಹೋಟೆಲ್ ಬ್ಯುಸಿನೆಸ್ ಮಾಡುತ್ತಿದ್ದವರೇ ಇವರ ಮೇಜರ್ ಟಾರ್ಗೆಟ್ ಆಗಿದ್ದರು.

You cannot copy content of this page